`ಮಸ್ತ್ ಕಲಂದರ್` ಬಿರುಸಿನ ಚಿತ್ರೀಕರಣ
Posted date: 26 Mon, Jan 2015 – 03:15:55 PM

ಮಹೇಶ್ ಚಂದ್ರ ಡ್ರೀಮ್ಸ್ ಆನ್ ಲಿಮಿಟೆಡ್ ಸಂಸ್ಥೆಯ ಪ್ರಥಮ ಕಾಣಿಕೆ ಮಸ್ತ್ ಕಲಂದರ್’...ನಂ ಕಥೆ ನಿಮ್ ಜೊತೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ಎರಡನೇ ಹಂತದ ಚಿತ್ರೀಕರಣ ತುಮಕೂರಿನಲ್ಲಿ ಫೆಬ್ರವರಿ 5 ರಿಂದ ಪ್ರಾರಂಭ ಆಗಲಿದೆ ಎಂದು ನಿರ್ದೇಶಕರು ತಿಳ

ಎ ಆರ್ ರೆಹಮಾನ್ ಅವರ ಮ್ಯೂಜಿಕ್ ಆಕಡೆಮೆ ಅಲ್ಲಿ ಮುಖ್ಯಸ್ಥರಾಗಿರುವ ಎಸ್ ಪ್ರೇಂಕುಮಾರ್ ಅವರ ರಾಗ ಸಂಯೋಜನೆ ಒಳಗೊಂಡ ಚಿತ್ರ ಆರು ಹಾಡು ಹಾಗೂ ಮೂರು ಬಿಟ್ ಗೀತೆಗಳನ್ನು ಒಳಗೊಂಡಿದೆ.

 

ದೃಶ್ಯ ಹಾಗೂ ಪ್ಲೇಯೆರ್ಸ್ ಚಿತ್ರಗಳ ನಟಿ ಸ್ವರೂಪಿಣಿ ಈ ಚಿತ್ರದ ಕಥಾ ನಾಯಕಿ. ನಿತಿನ್ ಗೌಡ ಈ ಚಿತ್ರದ ನಾಯಕ. ಸಿದ್ಲಿಂಗು ಶ್ರೀಧರ್, ಮಿತ್ರ, ಪ್ರಶಾಂತ್, ರಜನಿಕಾಂತ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

 

ಪ್ರಥಮ ನಿರ್ದೇಶನಕ್ಕೂ ಮುಂಚೆ ರಾಜಕುಮಾರ್ ಆದಿತ್ಯ ಅವರು ಸಹ ನಿರ್ದೇಶಕರಾಗಿ, ಗೀತ ರಚನೆಗಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

 

ಟಿ ವಿ ಕುಮಾರಸ್ವಾಮಿ (ತುಮಕೂರು), ಲೀಯ ಕೆ ಸ್ವಾಮಿ, ಎನ್ ಮಹೇಶ್, ಚಂದ್ರು ಎಸ್ ಎಲ್ ಅವರು ಈ ಚಿತ್ರದ ನಿರ್ಮಾಪಕರುಗಳು.

 

ಚಂದ್ರು ಎಸ್ ಎಲ್ ಅವರ ಕಥಾ ರಚನೆ ಹಾಗೂ ಗೀತೆಗಳು ಈ ಚಿತ್ರಕ್ಕಿದೆ. ಕಾಂತರಾಜು ಸಂಕಲನ, ಹರಿ ಕೃಷ್ಣ ನೃತ್ಯ ನಿರ್ದೇಶನ, ಸಹಾಯಕ ನಿರ್ದೇಶಕರಾಗಿ ಶ್ರೀಧರ್ ಎಸ್ ಎಲ್, ಲೋಕೇಶ್, ಎಸ್. ಮಣೂರ್ ಜೊತೆಯಾಗಿದ್ದಾರೆ. ವೀರೇಶ್ ಅವರ ಮೇಲ್ವಿಚಾರಣೆ ಸಹಾಯ ಮಸ್ತ್ ಕಲಂದರ್ ಸಿನಿಮಾಕ್ಕೆ ಇದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed